
ಬೆಳಗಾವಿ : ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರು ಜು.18 ರ ಶನಿವಾರದಂದು ಬೆಳಗಾವಿ ನಗರಕ್ಕೆ ಆಗಮಿಸಲಿದ್ದಾರೆ.
ಶ್ರೀಕೃಷ್ಣಮಠದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯ 60 ವರ್ಷ ಹಳೆಯದಾಗಿದ್ದು ಪ್ರಸ್ತುತ ವಿದ್ಯಾರ್ಥಿ ನಿಲಯದ ಜೀರ್ಣೋದ್ದಾರದ ಬಗ್ಗೆ ಚರ್ಚೆ ನಡೆಸಲು ಸಭಾ ಕಾರ್ಯಕ್ರಮ ನಡೆಸಲಿದ್ದಾರೆ. ಕಾರಣ ಬೆಳಗಾವಿ ನಗರದ ಶ್ರೀಕೃಷ್ಣಮಠದ ಭಕ್ತರು ಹಾಗೂ ಶ್ರೀಪಾದಂಗಳವರ ಅಭಿಮಾನಿಗಳು ಸಂಜೆ 5 ಗಂಟೆಗೆ ಬೆಳಗಾವಿ ಆರ್ ಪಿಡಿ ಕಾಲೇಜು ಎದುರಿನ ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಸಭಾ ಕಾರ್ಯಕ್ರಮಕ್ಕೆ ಆಗಮಿಸಿ ಅಗತ್ಯ- ಸಲಹೆ ಸೂಚನೆ ನೀಡುವಂತೆ ಕೋರಲಾಗಿದೆ. ಸಭಾ ಕಾರ್ಯಕ್ರಮದ ನಂತರ ಸಂಜೆ 7 ಗಂಟೆಗೆ ಶ್ರೀ ರಾಮ ವಿಠಲದೇವರ ತೊಟ್ಟಿಲು ಪೂಜೆ ಹಾಗೂ ತೀರ್ಥ ಪ್ರಸಾದ ಹಾಗೂ ಫಲ ಮಂತ್ರಾಕ್ಷತೆ ಇರಲಿದೆ.
ಹೆಚ್ಚಿನ ಮಾಹಿತಿಗಾಗಿ
ಶ್ರೀನಿವಾಸಾಚಾರ್ಯ ಹೊನ್ನಿದಿಬ್ಬ - ಮೊ.: 9886457735 ಮತ್ತು
ಗುರುರಾಜಾಚಾರ್ಯ ಜೋಶಿ - ಮೊ.: 9449420976 ಇಲ್ಲಿಗೆ ಸಂಪರ್ಕಿಸಬಹುದು.