Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

2025ರ ಬಗ್ಗೆ ನಾಸ್ಟ್ರಾಡಾಮಸ್ ಭವಿಷ್ಯವಾಣಿಗಳು: ಮುಂದಿನ ವರ್ಷ ಏನೆಲ್ಲ ಗಂಡಾಂತರ ಕಾದಿದೆ ?

ದೆಹಲಿ : 2024 ರ ವರ್ಷ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆಯೇ 2025ರ ಬಗ್ಗೆ ನಾಸ್ಟ್ರಾಡಾಮಸ್‌ ಹೇಳಿದ ಶತಮಾನಗಳ ಹಿಂದಿನ ಭವಿಷ್ಯವಾಣಿಗಳ ಬಗ್ಗೆ ಕುತೂಹಲ ಹೆಚ್ಚಾಗಿದೆ. 16 ನೇ ಶತಮಾನದ ಫ್ರೆಂಚ್ ಜ್ಯೋತಿಷಿ ಮತ್ತು ವೈದ್ಯರಾದ ನಾಸ್ಟ್ರಾಡಾಮಸ್ ಅವರು, ಜರ್ಮನಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ ಉದಯ, 9/11 ದಾಳಿಗಳು ಮತ್ತು ಕೋವಿಡ್‌-19 ಸಾಂಕ್ರಾಮಿಕ ರೋಗಗಳು ಇವೇ ಮೊದಲಾದವುಗಳ ಬಗ್ಗೆ ಶತಮಾನಗಳ ಹಿಂದೆಯೇ ಭವಿಷ್ಯ ಹೇಳಿದ್ದರು ಎಂದು ನಂಬಲಾಗಿದೆ.

1555 ರಲ್ಲಿ ಪ್ರಕಟವಾದ ಅವರ ಪುಸ್ತಕ, ಲೆಸ್ ಪ್ರೊಫೆಟೀಸ್, 942 ಕ್ರಿಪ್ಟಿಕ್ ಕ್ವಾಟ್ರೇನ್‌ಗಳನ್ನು ಒಳಗೊಂಡಿದೆ. 2025ರ ವರ್ಷದಲ್ಲಿ ಸಂಭವಿಸಬಹುದಾದ ವಿದ್ಯಮಾನಗಳ ಬಗ್ಗೆ ತಿಳಿಯಲು ನಾಸ್ಟ್ರಾಡಾಮಸ್‌ನ ನಿಗೂಢ ಪದ್ಯಗಳನ್ನು ವಿಶ್ಲೇಷಿಸುವ ಸಂಶೋಧಕರು ನೈಸರ್ಗಿಕ ವಿಪತ್ತುಗಳು, ಸಂಭವನೀಯ ಪ್ಲೇಗ್ ಮತ್ತು ಕ್ಷುದ್ರಗ್ರಹ ಬೆದರಿಕೆ ಇತ್ಯಾದಿ ಸಂಭಾವ್ಯ ಘಟನೆಗಳ ಬಗ್ಗೆ ಮುನ್ಸೂಚಿಸಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಅಂತ್ಯ
ನಾಸ್ಟ್ರಾಡಾಮಸ್‌ನ ಕ್ವಾಟ್ರೇನ್‌ಗಳಲ್ಲಿ ಒಂದು ದೊಡ್ಡ ಘರ್ಷಣೆಯ ಮುಕ್ತಾಯದ ಸುಳಿವು ನೀಡುತ್ತಿದೆ. ಇದು ರಷ್ಯಾ ಮತ್ತು ಉಕ್ರೇನ್ ನಡುವಿನ ನಡೆಯುತ್ತಿರುವ ಯುದ್ಧದ ಬಗ್ಗೆ ಉಲ್ಲೇಖಿಸುತ್ತದೆ ಎಂದು ಕೆಲವರು ನಂಬುತ್ತಾರೆ. ಅವರ ಬರಹಗಳು “ದಣಿದ ಸೈನ್ಯ” ಮತ್ತು ಕರೆನ್ಸಿಯ ಪರ್ಯಾಯ ರೂಪಗಳ ಬಳಕೆಯನ್ನು ಉಲ್ಲೇಖಿಸುತ್ತವೆ. ಹಾಗೂ ಯುದ್ಧವನ್ನು ಕೊನೆಗೊಳಿಸಲು ಸಂಭವನೀಯ ವೇಗವರ್ಧಕವಾಗಿ ಆರ್ಥಿಕ ಒತ್ತಡ ಕೆಲಸ ಮಾಡುತ್ತದೆ ಎಂಬುದನ್ನು ಸೂಚಿಸುತ್ತದೆ.
“ದೀರ್ಘ ಯುದ್ಧದ ಮೂಲಕ ಎಲ್ಲ ಸೈನ್ಯವು ದಣಿದಿದೆ, ಆದ್ದರಿಂದ ಅವರು ಚಿನ್ನ ಅಥವಾ ಬೆಳ್ಳಿಯ ಬದಲಿಗೆ, ಅವರು ಚರ್ಮ, ಗಾಲಿಕ್ ಹಿತ್ತಾಳೆ ಮತ್ತು ಚಂದ್ರನ ಅರ್ಧಚಂದ್ರಾಕೃತಿಯ ನಾಣ್ಯಕ್ಕೆ ಬರುತ್ತಾರೆ” ಎಂದು ನಾಸ್ಟ್ರಾಡಾಮಸ್‌ ಬರೆದಿದ್ದಾರೆ.

ಪ್ಲೇಗ್ ಕಾಟ
ಹೊಸ ವರ್ಷವು “ಕ್ರೂರ ಯುದ್ಧಗಳಿಂದ” ಸುತ್ತುವರೆದಿರುವ ಇಂಗ್ಲೆಂಡ್‌ಗೆ ಹೆಚ್ಚು ಭಾರವಾಗಿರುತ್ತದೆ ಮತ್ತು “ಶತ್ರುಗಳಿಗಿಂತ ಕೆಟ್ಟ”ದಾಗಿ ಕಾಡುವ “ಪ್ರಾಚೀನ ಪ್ಲೇಗ್” ಕಾಟ ಏಕಾಏಕಿ ಎದುರಾಗಲಿದೆ ಎಂದು ನಾಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ. ಅವರ ಕೋವಿಡ್‌-19 ಸಾಂಕ್ರಾಮಿಕ ಭವಿಷ್ಯವು ನಿಜವಾಗಿರುವುದರಿಂದ ಅವರ ಈ ಭವಿಷ್ಯವಾಣಿಯನ್ನು ಹಲವರು ನಂಬಿದ್ದಾರೆ.
ಭೂಮಿಗೆ ಕ್ಷುದ್ರಗ್ರಹ ಡಿಕ್ಕಿ?
ನಾಸ್ಟ್ರಾಡಾಮಸ್ 2025ರಲ್ಲಿ ಭೂಮಿಯೊಂದಿಗೆ ದೈತ್ಯ ಕ್ಷುದ್ರಗ್ರಹ ಡಿಕ್ಕಿ ಹೊಡೆಯಬಹುದು ಅಥವಾ ಭೂಮಿಗೆ ಅಪಾಯ ತರಬಹುದಾದಷ್ಟು ಸಾಮೀಪ್ಯದಲ್ಲಿ ಕ್ಷುದ್ರಗ್ರಹ ಬರಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಭವಿಷ್ಯವು ಜೀವಿಗಳ ನಾಶದ ಬಗ್ಗೆ ಸೂಚಿಸುತ್ತದೆಯಾದರೂ, ಕ್ಷುದ್ರಗ್ರಹಗಳು ಗ್ರಹದ ಹತ್ತಿರ ಬರುವುದು ಹೊಸ ವಿದ್ಯಮಾನವಲ್ಲ. ಪ್ರತಿ ವರ್ಷ ನೂರಾರು ಕ್ಷುದ್ರಗ್ರಹಗಳು ಭೂಮಿಯನ್ನು ದಾಟುತ್ತವೆ ಮತ್ತು ಅವುಗಳಲ್ಲಿ ಹೆಚ್ಚಿನವು ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುತ್ತವೆ.
ಬ್ರೆಜಿಲ್‌ನಲ್ಲಿ ನೈಸರ್ಗಿಕ ವಿಪತ್ತುಗಳು
ನಾಸ್ಟ್ರಾಡಾಮಸ್ “ಗಾರ್ಡನ್ ಆಫ್ ದಿ ವರ್ಲ್ಡ್” ಎಂದು ಉಲ್ಲೇಖಿಸುವ ದಕ್ಷಿಣ ಅಮೆರಿಕಾದ ಬ್ರೆಜಿಲ್ ದೇಶವು ಹವಾಮಾನ ಬದಲಾವಣೆಗೆ ಸಂಬಂಧಿಸಿದ ಪ್ರವಾಹ ಮತ್ತು ಸಂಭಾವ್ಯ ಜ್ವಾಲಾಮುಖಿ ಸ್ಫೋಟದ ಸಮಸ್ಯೆ ಎದುರಿಸಬಹುದು ಎಂದು ಆತನ ಭವಿಷ್ಯವಾಣಿಯು ಹೇಳಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?