Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಪರೀಕ್ಷೆ ಮುಗಿಸಿ ಮೋಜು ಮಾಡಲು ಹೋಗಿ ಬೆಳಗಾವಿ ಬಾಲಕ ಕಿತವಾಡ ಫಾಲ್ಸ್ ನಲ್ಲಿ ನೀರುಪಾಲು..!

ಬೆಳಗಾವಿ ಬಾಲಕ ಕಿತವಾಡ ಪಾಲ್ಸ್ ನಲ್ಲಿ ನೀರುಪಾಲು..!

ಪರೀಕ್ಷೆ ಮುಗಿಸಿ ಮೋಜು ಮಾಡಲು ಹೋಗಿ ಪ್ರಾಣ ಕಳೆದುಕೊಂಡ ವಿಧ್ಯಾರ್ಥಿ..!

ಮುಗಿಲು ಮುಟ್ಟಿದ ಗೆಳೆಯರ ಆಕ್ರಂದನ.

ಜನ ಜೀವಾಳ : ಬೆಳಗಾವಿ : 10 ನೇ (CBSC) ತರಗತಿಯ ಪರೀಕ್ಷೆ ಮುಗಿಸಿದ ಖುಷಿಯಲ್ಲಿ ತನ್ನ ಗೆಳೆಯರೆಲ್ಲರನ್ನು ಕರೆದುಕೊಂಡು ಬೆಳಗಾವಿ ಗಡಿ ಭಾಗದಲ್ಲಿರುವ ಮಹಾರಾಷ್ಟ್ರದ ಕಿತವಾಡ ಪಾಲ್ಸ್ ನಲ್ಲಿ ಮೋಜು ಮಾಡಲು ಹೋಗಿದ್ದ ಬೆಳಗಾವಿ ಹೈಸ್ಕೂಲ್ ವಿದ್ಯಾರ್ಥಿ ನೀರುಪಾಲಾಗಿದ್ದಾನೆ.

ಬೆಳಗಾವಿ ಅಜಮ್ ನಗರ ನಿವಾಸಿ ಹಾಗೂ ಲವಡೇಲ್ ಸ್ಕೂಲ್‌ ನ ವಿದ್ಯಾರ್ಥಿ ಉಜೈಪ್ ಮುಜಾವರ ಸಾವನಪ್ಪಿರುವ ಬಾಲಕ.

ಆಗಿದ್ದೇನು..?

ನಿನ್ನೆ ಅಷ್ಟೇ ಉಜೈಪ್ ತನ್ನ SSLC ಪರೀಕ್ಷೆ ಮುಗಿಸಿದ್ದಾನೆ. ಅದೆ ಖುಷಿಯಲ್ಲಿ ಮೋಜು ಮಾಡಲು 14 ಗೆಳೆಯರು ಕೂಡಿಕೊಂಡು ಕಿತವಾಡ ಪಾಲ್ಸ್ ಗೆ ಹೋಗಿದ್ದಾರೆ. ಆಗ ಡ್ಯಾಮಿನ ಹಿನ್ನೀರಿನಲ್ಲಿ ಉಜೈಪ್ ಈಜಲು ಹೋಗಿದ್ದಾನೆ. ಈಜುವಾಗ ಗೆಳೆಯರಿಗೆ ಮುಳುಗಿದ ಹಾಗೆ ಎರಡು ಬಾರಿ ನಕಲಿ ಮಾಡಿಸಿ ತೋರಿಸಿದ್ದಾನೆ. ಇದನ್ನು ನೋಡಿದ ಸ್ನೇಹಿತರು ಈಜುವುದು ಬೇಡ ಹೋಗೋಣ ಬಾ ಎಂದಿದ್ದಾರೆ. ಆದರೆ ಆತ ಬಾರದೆ ಮತ್ತೆ ಅದೆ ರೀತಿ ನಕಲಿ ಮಾಡಲು ಹೋದಾಗ ನೀರಿನಲ್ಲಿ ಮುಳುಗಿದವ ಮೇಲೆ ಬಂದೆ ಇಲ್ಲ. ಆಗ ಭಯಭೀತಗೊಂಡ ಬಾಲಕರು ಕಿರುಚುವುದನ್ನು ಕಂಡು ಓಡಿ ಬಂದ ಸ್ಥಳಿಯರು ಉಜೈಪ್ ನನ್ನು ಹುಡುಕಲು ಪ್ರಯತ್ನಿಸಿದರು ಸಿಕ್ಕಿಲ್ಲ.

ಮೃತ ದೇಹಕ್ಕಾಗಿ ರಾತ್ರಿಯಿಡೀ ನಡೆದ ಕಾರ್ಯಾಚರಣೆ ..!

ನೀರುಪಾಲಾಗಿರುವ ಬಾಲಕನ ಮೃತದೇಹಕ್ಕಾಗಿ ಬೆಳಗಾವಿ NDRF ತಂಡ ಕಾರ್ಯಾಚರಣೆ ನಡೆಸಿದರೂ ಇನ್ನೂ ಸಿಕ್ಕಿಲ್ಲ. ಸ್ನೇಹಿತನ ಸಾವು ಕಣ್ಮುಂದೆ ಕಂಡಿರುವ ಬಾಲಕರು ರಾತ್ರಿಯಿಡೀ ಅವರ ಕುಟುಂಬದವರೊಂದಿಗೆ ಉಜೈಪ್ ನ ಮೃತದೇಹಕ್ಕಾಗಿ ಸ್ಥಳದಲ್ಲೇ ಕಾದು ಕುಳಿತಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?