Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಇಪ್ಪತ್ತಕ್ಕೂ ಹೆಚ್ಚು ಬೈಕ್ ಕದ್ದ ತ್ರಿಮೂರ್ತಿಗಳು ಕಂಬಿ ಹಿಂದೆ...!  

ಬೆಳಗಾವಿ ಗ್ರಾಮೀಣ ಪೊಲೀಸರ ಕಾರ್ಯ ಶ್ಲಾಘನೆ ..!

ಬೆಳಗಾವಿ : ಜನಜೀವಾಳ ಜಾಲ : ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಿಂದ ಮೋಟರ್ ಸೈಕಲಗಳನ್ನು ಕಳವು ಮಾಡಿದ ಮೂರು ಆರೋಪಿತರನ್ನು  ಬಂಧಿಸಲಾಗಿದೆ. ಸುಮಾರು 11,73,000/-ರೂ. ಮೌಲ್ಯದ ಒಟ್ಟು 20 ಮೋಟರ್ ಸೈಕಲಗಳನ್ನು ಪಡಿಸಿಕೊಳ್ಳಲಾಗಿದೆ.
ದಿನಾಂಕ 23/04/2026 ರಂದು ಶ್ರೀ. ದಿಲಿಪ ತುಕಾರಾಮ ಜಾಧವ, ಸಾ॥ ಹೊನಗಾ ತಾಜಿ॥ ಬೆಳಗಾವಿ ಇವರು ಯಳ್ಳೂರ ಗ್ರಾಮದಲ್ಲಿ ತನ್ನ ಮೋಟರ್ ಸೈಕಲ ನಂಬರ ಕೆಎ-22/ಇವಾಯ್-6688 ನೇದ್ದು ಕಳ್ಳತನ ಆಗಿರುವ ಬಗ್ಗೆ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದಂತೆ ಬೆಳಗಾವಿ ಗ್ರಾಮೀಣ ಠಾಣೆ ಅಪರಾಧ ಸಂಖ್ಯೆ 105/2026 ಕಲಂ 303(2) ಬಿಎನ್ಎಸ್ ನೇದ್ದರಡಿ ಪ್ರಕರಣ ದಾಖಲ ಮಾಡಿ ತನಿಖೆ ಕೈಕೊಂಡಿದ್ದು ಇರುತ್ತದೆ.  ದಿ. 2 ರಂದು  ಈ ಕೆಳಗಿನ ಆರೋಪಿಗಳನ್ನು ಬಂಧಿಸಲಾಗಿದೆ.
1) ಫಕೀರಪ್ಪ ಸಿದ್ದಪ್ಪ ಕರಿಗಾರ ವಯಸ್ಸು 25 ವರ್ಷ, ಸಾ॥ ಹೀರೆಹಟ್ಟಿ ತಾ॥ ಗೋಕಾಕ ಜಿ॥ ಬೆಳಗಾವಿ
2) ರಮೇಶ ಪ್ರಭು ಪಾಟೀಲ, ವಯಸ್ಸು 23 ವರ್ಷ, ಸಾ॥ ಆಲದಾಳ ತಾ॥ ಹುಕ್ಕೇರಿ ಜಿ॥ ಬೆಳಗಾವಿ
3) ಕಮಲಪ್ಪ @ ಕಮಲು ಯಲ್ಲಪ್ಪ ಗುಂಡ್ಯಾಗೋಳ, ವಯಸ್ಸು 38 ವರ್ಷ, ಸಾ|| ಕೆಂಚನಟ್ಟಿ, ಮಾರ್ಕಂಡೇಯ ನಗರ ತಾ॥ ಬೆಳಗಾವಿ
 ಯಳ್ಳೂರದಲ್ಲಿ ಒಂದು ಮತ್ತು ಮಾರ್ಕಂಡೇಯನಗರದಲ್ಲಿ ಒಂದು ಹಾಗೂ ಬೆಳಗಾವಿ ನಗರದ ಟಿಳಕವಾಡಿ ಮತ್ತು ಶಹಾಪೂರ ಠಾಣೆಗಳ ವ್ಯಾಪ್ತಿಯಲ್ಲಿ ಒಂದೊಂದು ಮತ್ತು ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಮತ್ತು ಇನ್ನಿತರ ಕಡೆಗಳಲ್ಲಿ ಮೋಟರ್ ಸೈಕಲಗಳನ್ನು ಕಳ್ಳತನ ಮಾಡಿದ್ದರ ಬಗ್ಗೆ ಒಪ್ಪಿಕೊಂಡಿರುತ್ತಾರೆ. ಸದರಿ ಆರೋಪಿತರಿಂದ ವಿವಿಧ ಕಂಪನಿಗಳಾದ ಯಮಹಾ, ಹಿರೋ ಸ್ಟೆಂಡರ್, ಟಿವಿಎಸ್, ಸುಜುಕಿ ಹೀಗೆ ಒಟ್ಟು ಸುಮಾರು 11,73,000 ಕಿಮ್ಮತ್ತಿನ ಒಟ್ಟು 20 ಮೋಟರ್ ಸೈಕಲಗಳನ್ನು ವಶಕ್ಕೆ ಪಡೆದುಕೊಂಡಿದ್ದು ಇರುತ್ತದೆ.
ಈ ತನಿಖಾ ತಂಡದಲ್ಲಿಯ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ನಾಗನಗೌಡ ಕಟ್ಟಿಮನಿಗೌಡ್ರ ಪೊಲೀಸ್ ಇನ್ಸಪೆಕ್ಟರ್, ಶ್ರೀ ಸಂತೋಷ ದಳವಾಯಿ ಪಿಎಸ್‌ಐ, ಶ್ರೀ ಲಕ್ಕಪ್ಪ ಜೋಡಟ್ಟಿ ಪಿಎಸ್‌ಐ ಮತ್ತು ಸಿಬ್ಬಂದಿಗಳಾದ  ಸತೀಶ ನಾಯಕವಾಡ, ಶ್ರೀಕಾಂತ ಉಪ್ಪಾರ,ಬಾಳೇಶ ಪಡನಾಡ, ಸಣ್ಣಪ್ಪ ಹಂಚಿನಮನಿ, ಆನಂದ ಕೊಟಗಿ, ಶಿವಾನಂದ ವರ್ಚಗಲ್ಲ,  ಅಮೀತ ರೂಪನವರ ಸಿಪಿಸಿ 1946 ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳಾದ ರಮೇಶ ಅಕ್ಕಿ, ಮಹಾದೇವ ಕಾಶಿದ, ದೀಪಕ ದೊಡಗೋಣಿ ಇವರು ಪ್ರಸಂಶನೀಯಯ ಕೆಲಸ ಮಾಡಿದ್ದು,  ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ಮಾನ್ಯ ಪೊಲೀಸ್ ಉಪ ಆಯುಕ್ತರು (ಕಾ&ಸು) ಮತ್ತು ಪೊಲೀಸ ಉಪ ಆಯುಕ್ತರು (ಅಪರಾಧ ಮತ್ತು ಸಂಚಾರ) ಹಾಗೂ ಸಹಾಯಕ ಪೊಲೀಸ ಆಯುಕ್ತರು, ಬೆಳಗಾವಿ ಗ್ರಾಮೀಣ ಉಪವಿಭಾಗ ರವರು ಶ್ಲಾಘಿಸಿರುತ್ತಾರೆ.

 

Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?ಸತೀಶಗೆ ಬಹುತೇಕ ಕೆಪಿಸಿಸಿ ಅಧ್ಯಕ್ಷ ಹುದ್ದೆ ? ಮೂವರಿಗೆ ಡಿಸಿಎಂ ಸ್ಥಾನ ಕೊಡಿ ಎಂಬ ಬೇಡಿಕೆ ಸಿದ್ದರಾಮಯ್ಯ ಬಣದ್ದು