Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಸ್ವದೇಶಿ ವಸ್ತುಗಳ ಮಹತ್ವ : ಬೂತ್ ಮಟ್ಟದ ಸಂಪರ್ಕ ಅಭಿಯಾನ ಕಾರ್ಯಾಗಾರ



ಖಾನಾಪುರ:

ಖಾನಾಪುರ ತಾಲೂಕು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಆತ್ಮ ನಿರ್ಭರ ಅಭಿಯಾನ ಅಡಿಯಲ್ಲಿ ಸ್ವದೇಶಿ ವಸ್ತುಗಳ ಮಹತ್ವ ಬೂತ್ ಮಟ್ಟದ ಸಂಪರ್ಕ ಅಭಿಯಾನ ಕಾರ್ಯಗಾರ ನಡೆಸಲಾಯಿತು.

ಅಧ್ಯಕ್ಷತೆಯನ್ನು ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಬಸವರಾಜ ಸಾಣಿಕೊಪ್ಪ ವಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನಂತೆ ಸ್ವದೇಶಿ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಬೆಳಗಾವಿ ಜಿಲ್ಲಾ ಅಭಿಯಾನದ ಸಂಚಾಲಕ ಮಹೇಶ್ ಮೋಹಿತೆ ಮಾತನಾಡಿ, ಅಕ್ಟೋಬರ್ 13 ರಿಂದ ಡಿಸೆಂಬರ್ 31 ರ ವರೆಗೆ ನಡೆಯುವ ಅಭಿಯಾನದಲ್ಲಿ ಸಮಗ್ರ ಮಾಹಿತಿ ಕಾರ್ಯಕರ್ತರ ವರೆಗೆ ಮುಟ್ಟುವ ಅವಶ್ಯಕತೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವದೇಶಿ ವಸ್ತುಗಳ ಬಗ್ಗೆ ಕೈಗೊಂಡಿರುವ ಮಹತ್ವವನ್ನು ಕಾರ್ಯಕರ್ತರು ತಮ್ಮ ಬೂತ್ ಗಳಲ್ಲಿ ಪ್ರತಿಯೊಬ್ಬರಿಗೆ ಮುಟ್ಟಿಸುವ ಕಾರ್ಯವನ್ನು ಮಾಡಬೇಕೆಂದು ತಿಳಿಸಿದರು

ಬಿಜೆಪಿಯ ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಬಿಜೆಪಿ ಮಾಜಿ ತಾಲೂಕು ಅಧ್ಯಕ್ಷ ಸಂಜಯ್ ಕುಬಲ್, ಚೇತನ ಮನೆರೀಕರ್ ಮೊದಲಾದವರು ತಮ್ಮ ವಿಚಾರವನ್ನು ಮಂಡಿಸಿದರು.

ಇತ್ತೀಚೆಗೆ ನಡೆದ ಮಲಪ್ರಭಾ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಹೊಸ ಚುನಾಯಿತ ಸದಸ್ಯ ತಾಲೂಕು ಪಂಚಾಯತ್ ಮಾಜಿ ಸದಸ್ಯ ಶ್ರೀಕಾಂತ ಇಟಗಿ ಅವರನ್ನು ಸನ್ಮಾನಿಸಲಾಯಿತು.

ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುಂಡು ತೋಪಿನಕಟ್ಟಿ, ಲಕ್ಷ್ಮಣ ಜಂಜರಿ, ಲಕ್ಷ್ಮಣ ಬಾಮಣಿ, ಪಂಡಿತ ಓಗಳೆ, ಸುಂದರ ಕುಲಕರ್ಣಿ , ಮೋಹನ ಪಾಟೀಲ, ಸಂಜಯ ಪಾಟೀಲ, ಯಶವಂತ ಕಡೊಳ್ಳಿ, ಹನುಮಂತ ಪಾಟೀಲ, ಕಿಶೋರ್ ಹೆಬ್ಬಾಳ್ಕರ್, ಪ್ರಶಾಂತ ಲಕ್ಕೇಬೈಲ್ಕರ್, ಬಾಳಾಸಾಹೇಬ್ ಸಾವಂತ, ರಾಜು ಲಕ್ಕೇಬೈಲಕರ, ಸುನೀತಾ ಪಾಟೀಲ, ಕಲ್ಪನಾ ಸಾವಂತ, ಮಾರುತಿ ಕಮತಗಿ, ಕಲಮೇಶ ತಿಗಡಿ, ಶಿವಾನಂದ ಗೋಧೂಳಿ, ರಾಜು ರಪಾಟಿ, ಸುನಿಲ್ ಪ್ರಭು, ಸದಾನಂದ ಮಾಶೇಖರ, ಪುಂಡಲೀಕ, ಸಂಜಯ ಪಾಟೀಲ, ಫಕೀರ ಪವಾರ, ಸದಾನಂದ ಹೊಸೂರಕರ, ರಮೇಶ ಕೋಟಗಿ, ಆತ್ಮಾನಂದ ಪಾಟೀಲ, ರವಿ ಪಾಟೀಲ, ತಾಲೂಕಿನ ಕಾರ್ಯಕರ್ತರು ಉಪಸ್ಥಿತರಿದ್ದರು.

ಮಲ್ಲಪ್ಪ ಮಾರಿಹಾಳ ಸ್ವಾಗತಿಸಿದರು. ಖಾನಾಪುರ ತಾಲೂಕು ಅಭಯಾನ ಸಂಚಾಲಕ ಸದಾನಂದ ಪಾಟೀಲ ವಂದಿಸಿದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು