Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬಡವರ ಅನ್ನಭಾಗ್ಯ ಅಕ್ಕಿ ಗುಳುಂ ಮಾಡಿದ್ನಾ ಅಗಸಗಿ PKPS ಲೂಟಿಕೋರ..?

ಬಡವರ ಅನ್ನಭಾಗ್ಯ ಅಕ್ಕಿ ಗುಳುಂ ಮಾಡಿದ್ರಾ ಅಗಸಗಿ PKPS ಲೂಟಿಕೋರ..?

ಐದೇ ತಿಂಗಳಲ್ಲಿ ಮೂರಾಬಟ್ಟಿಯಾದ ಅಗಸಗಿ PKPS ವ್ಯವಸ್ಥೆ..?

ಊರಬಿಟ್ಟು ಅಧ್ಯಕ್ಷನ ವಾಸ ; ರೇಶನ್ ಸಿಗದೆ ಪಡಿತರಿಗೆ ವನವಾಸ..?

ಹೆಬ್ಬೆರಳು ಹಚ್ಚಿ ತಿಂಗಳಾದರೂ ಕೆಲವರಿಗೆ ಸಿಗದ ಅನ್ನಭಾಗ್ಯ ಅಕ್ಕಿ..?

ಲೂಟಿಕೋರ ಸದಸ್ಯನ ಕೈಯಲ್ಲಿ ಅಂಗಡಿ ಕೀಲಿಕೈ.. ಸಾವಿರಾರು ಕೆಜಿ ಅಕ್ಕಿಗೆ ಬೈ ಬೈ..?

PKPS ಲೂಟಿ ಭಾಗ-1..!

ಬೆಳಗಾವಿ : ಅಗಸಗಿ PKPSಗೆ ನವೆಂಬರನಲ್ಲಿ ನಡೆದ ಚುನಾವಣೆಯಲ್ಲಿ ರೈತರಿಗೆ ಹಗಲು ಕನಸು ತೋರಿಸಿ, ರೈತರಿಗೆ ರಾಯಲ್ ಸೌಲಭ್ಯ ನೀಡುತ್ತೆವೆ ಎಂದು ಅಧಿಕಾರಕ್ಕೇರಿದ ಹೊಸ ಆಡಳಿತ ಮಂಡಳಿ ಐದೇ ತಿಂಗಳಲ್ಲಿ ಸೊಸೈಟಿಯನ್ನು ಮೂರಾಬಟ್ಟಿ ಮಾಡಿಬಿಟ್ಟಿದೆ.

ಹಾಲಿ ಅಧ್ಯಕ್ಷ ಸದ್ಯ ಸಾಚಾ ಇದ್ದರು ಊರಬಿಟ್ಟು ವಾಸವಾಗಿದ್ದರಿಂದ ಅಧ್ಯಕ್ಷನ ಅನುಪಸ್ಥಿತಿಯಲ್ಲಿ ಲೂಟಿಕೋರ ಖ್ಯಾತಿಯ ಸದಸ್ಯನೊಬ್ಬ ಸೊಸೈಟಿಯನ್ನು ನುಂಗಿ ನೀರು ಕುಡಿಯಲು ಮಂದಾಗಿದ್ದಾನೆ. ಯಾಕೆಂದರೆ ಈ ಹಿಂದೆ ಈತ ಮಾಡಿದ್ದು ಅದೆ. ಇದರಿಂದಾಗಿ ಊರಬಿಟ್ಟ ಹಾಲಿ ಅಧ್ಯಕ್ಷನ ಬೇರೆಡೆಯ ವಾಸ ಪಡಿತರಿಗೆ, ರೈತರಿಗೆ ವನವಾಸವಾಗಿ ಪರಿಣಮಿಸಿದೆ.

ಖಾಲಿಯಾದ ರೇಶನ್; ಹೆಬ್ಬೆರಳು ಕೊಟ್ಟು ತಿಂಗಳಾದರೂ ಅಕ್ಕಿ ಸಿಗದೆ ಕೈಕಟ್ಟಿ ಕುಳಿತ ಜನ.

ನಿಯಮದ ಪ್ರಕಾರ ಹೆಬ್ಬೆರಳು ಹಚ್ಚಿದ ತಕ್ಷಣ ಪಡಿತರ ನೀಡಬೇಕು. ಆದರೆ ಅಗಸಗಿ ಪಿಕೆಪಿಎಸ್ ನಲ್ಲಿ ಮಾತ್ರ ವಿಚಿತ್ರತೆ ನಡೆಯುತ್ತಿದೆ. ಪ್ರತಿ ಗಲ್ಲಿಯ ಪಡಿತರಿಗೆ ಒಂದೊಂದು ದಿನ ನಿಗದಿಪಡಿಸಿ ಹೆಬ್ಬೆರಳು ಹಚ್ಚಿಕೊಂಡು ರೇಶನ್ ಕೊಡುವುದಾಗಿ ಹೇಳಿ ಈಗ ರೇಶನ್ ಖಾಲಿ ಆಗಿದೆ. ಬೇರೆ ಊರಿನಲ್ಲಿದೆ ಅಲ್ಲಿಂದ ತಂದು ಕೊಡುತ್ತೇವೆ ಎಂದು ಮೂಗಿಗೆ ತುಪ್ಪ ಹಚ್ಚುವ ಕೆಲಸ ಕಳೆದೊಂದು ತಿಂಗಳಿನಿಂದ ಮಾಡಲಾಗುತ್ತಿದೆ.

ಎಲ್ಲಿಗೆ ಹೊಯ್ತು ರೇಶನ್ ಅಕ್ಕಿ..?

ಆಹಾರ ಇಲಾಖೆಯವರ ಪ್ರಕಾರ ಅಗಸಗಿಗೆ ಕೊಡಬೇಕಾದ ಸಂಪೂರ್ಣ ಪಡಿತರವನ್ನು ಕೊಡಲಾಗಿದೆ. ಆದರೆ ಆ ರೇಶನ್ ಎಲ್ಲಿಗೆ ಹೊಯ್ತು ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಬಲ್ಲ ಮೂಲಗಳ ಪ್ರಕಾರ ರೇಶನ್ ಸಾವಿರಾರು ಕೆಜಿ ಅನ್ನಭಾಗ್ಯ ಅಕ್ಕಿ ಲೂಟಿ ಮಾಡುವ ಕೆಲಸ ಅಧಿಕಾರಿಗಳ ಜತೆ ಸೇರಿ ನಡೆಸಲಾಗುತ್ತದೆ ಎಂದು ತಿಳಿದು ಬಂದಿದೆ. ಇದರ ಹಿಂದೆ ಲೂಟಿಕೋರ ಸದಸ್ಯನ ಪಾತ್ರವಿರುವುದು ಸ್ಪಷ್ಟವಾಗಿದೆ.

ಮುಂಗಾರು ಬಂದರು ರೈತರಗೆ ಸಿಗದ ಸಾಲ, ಹಳ್ಳ ಹಿಡಿದ ಸೊಸೈಟಿ ಸಿಸ್ಟಮ್ ..!

ಪಿಕೆಪಿಎಸ್ ಸೊಸೈಟಿಯಿಂದ ಪಡೆದ ಸಾಲಕ್ಕೆ ವರ್ಷದ ಹಿಂದೆ ರೈತರು ಸಕಾಲದಲ್ಲಿ ಹೊರಗಡೆಯಿಂದ ಬಡ್ಡಿ ಮೇಲೆ ಸಾಲ ತೆಗೆದು ತುಂಬಿದ್ದರೂ, ಇದೂವರೆಗೆ ಸಾಲ ನೀಡುವುದಕ್ಕೆ ಹೊಸ ಮಂಡಳಿ ಮುಂದಾಗಿಲ್ಲ. ಇದಕ್ಕೆ ಆ ಲೂಟಿಕೋರ ಸದಸ್ಯ ಹಾಗೂ ಕಂದಮ್ಮಗಳ ಅನ್ನ ಕಸಿದು ತಿನಿದು ಸದಸ್ಯನೇ ಕಾರಣ ಎಂದು ತಿಳಿದಿದೆ.

ಹೊಸ ಅಧ್ಯಕ್ಷನಿಂದ ರೈತ ಹಾಗೂ ಜನತೆಗೆ ಭಾರಿ ನಿರೀಕ್ಷೆ ಇತ್ತು. ಇತ ಬಂದಮೇಲೆ ನಮಗೆ ಫಲ ನೀಡುವ ಸೊಸೈಟಿಯನ್ನಾಗಿ ಮಾಡುತ್ತಾರೆ ಎಂದು ನಂಬಿದ್ದರು. ಆದರೆ ಆ ಲೂಟಿಕೋರ ಸದಸ್ಯ ತನ್ನ ವಯಕ್ತಿಕ ಲಾಭ ಹಾಗೂ ದ್ವೇಷಕ್ಕಾಗಿ ಸೊಸೈಟಿಯನ್ನು ಬಲಿ ಪಡೆಯುತ್ತಿದ್ದಾನೆ. ಇದನ್ನು ಕಂಡು ಕಾಣದಂತೆ ಇರುವ ಉಳಿದ ಸದಸ್ಯರು ರಬ್ಬರ ಸ್ಟ್ಯಾಂಪಗಳಾಗಿದ್ದಾರೆ.

ಇದು ಅಗಸಗಿ PKPS ಲೂಟಿ ಭಾಗ-1 ಆಗಿದ್ದು, ಮುಂದಿನ ಭಾಗದಲ್ಲಿ ಆ ಲೂಟಿಕೋರ, ಲಪಂಗ ಸದಸ್ಯ ಹಿಂದೆ ಮಾಡಿರುವ ಹಾಗೂ ಮಾಡುತ್ತಿರುವ ಲೂಟಿಗಳ ಬಗ್ಗೆ ಜನಜೀವಾಳದಲ್ಲಿ ವಿಸ್ತೃತ ವರದಿಗಳು ಮೂಡಿಬರಲಿವೆ.
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕನ್ನಡ ಸಾಹಿತ್ಯ ಪರಿಷತ್ ಸರ್ಜರಿಗೆ ಹಾರ್ಟ್ ಸರ್ಜನ್ ಬೆಳಗಾವಿ ಮಣ್ಣಿನ ಮಗಳು ಡಾ.ವಿಜಯಲಕ್ಷ್ಮೀ ಬಾಳೆಕುಂದ್ರಿ ಸಜ್ಜು ಚುನಾವಣೆ ಸ್ಪರ್ಧೆಗೆ ನಿರ್ಧಾರ | ಗೆದ್ದರೆ ಪ್ರಥಮ ಅಧ್ಯಕ್ಷೆ, ತೋಂಟದಾರ್ಯ ಮಠದ ಜಗದ್ಗುರುಗಳು ಬೆಂಬಲಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿಅಯೋಧ್ಯೆ ರಾಮಮಂದಿರದ ಮೊದಲ ಸಿಇಒ ಆಗಿ ನಿವೃತ್ತ ಏರ್‌ ಮಾರ್ಷಲ್‌ ಜೀತೇಂದ್ರ ಮಿಶ್ರ ನೇಮಕಸುಪ್ರೀಂ ಕೋರ್ಟಿನಲ್ಲಿರುವ ಗಡಿ ವಿವಾದ ಪ್ರಕರಣದ ತ್ವರಿತ ವಿಚಾರಣೆಗೆ ಮಹಾರಾಷ್ಟ್ರ ಸರಕಾರ ಅರ್ಜಿ ಸಲ್ಲಿಸಿರುವ ಕುರಿತು ಪ್ರತಿಕ್ರಿಯಿಸಿದ ಅಶೋಕ ಚಂದರಗಿ8 ಜನ ಮೊಬೈಲ್ ಕಳ್ಳರನ್ನು ಬಂಧಿಸಿದ ಕಟಕೋಳ ಪೊಲೀಸರು200 ವರ್ಷಗಳ ಬಳಿಕ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನ : ರಥದಲ್ಲಿ ಕುಳ್ಳಿರಿಸಿ ಮೆರವಣಿಗೆ ಮೂಲಕ ಮನೆಗೆ ಕರೆತಂದ ಕುಟುಂಬ !ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ ಮಾಡಿದ್ದ ಅಜ್ಜಿಯ ಬಂಧನಪುತ್ರಿಯರ ಶಿಕ್ಷಣಕ್ಕಾಗಿ ಸೀರೆಯುಟ್ಟು ಬರಿಗಾಲಿನಲ್ಲಿ ಓಡಿ ʼಮ್ಯಾರಥಾನ್‌ʼನಲ್ಲಿ ಮೊದಲ ಸ್ಥಾನ ಪಡೆದ 47 ವರ್ಷದ ತಾಯಿ !ರಷ್ಯಾ ಅತಿಹೆಚ್ಚು ತೈಲ ಉತ್ಪಾದನೆ ಮಾಡುತ್ತಿದ್ರೂ ಈಗ ಅದಕ್ಕೇ ದಾಖಲೆ ಪ್ರಮಾಣದಲ್ಲಿ ಪೆಟ್ರೋಲ್ ಪೂರೈಸುತ್ತಿರುವ ಭಾರತ ! ಕಾರಣ ?ವೈಶ್ಯ ಸಮಾಜದ ಏಕತೆ, ಪ್ರಗತಿಗೆ ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ