Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ವಿಶ್ವ ನರ್ಸಿಂಗ್ ದಿನಾಚರಣೆ ಉದ್ಘಾಟನೆ

 

ಬೆಳಗಾವಿ : ರೋಗಿಯ ಆರೈಕೆಯಲ್ಲಿ ತೊಡಗುವ ಸೇವೆ ಅತ್ಯಂತ ಒಳ್ಳೆಯದು. ಕರುಣಾಮಯಿಯಾಗಿ ತಾಯಿ ರೂಪದಲ್ಲಿ ಆರೈಕೆ ಮಾಡುವ ನರ್ಸಿಂಗ್ ವೃತ್ತಿಯು ಅಷ್ಟೇ ಕಠಿಣವಾದದ್ದು. ಆದ್ದರಿಂದ ಪ್ರಸಕ್ತ ವೈದ್ಯಕೀಯ ಕ್ಷೇತ್ರದಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತ ಅವುಗಳನ್ನು ಅಳವಡಿಸಿಕೊಳ್ಳಬೇಕು. ಈಗಿರುವ ಸ್ಪರ್ಧಾತ್ಮಕ ಯುಗದಲ್ಲಿ ಗುಣಾತ್ಮಕ ಹಾಗೂ ಧನಾತ್ಮಕ ಭಾವನೆಯಿಂದ ಕಲಿಕೆ ನಿರಂತರವಾಗಿರಲಿ. ಶಸ್ತ್ರಾಸ್ತ್ರ ಪಡೆ ಸೇರಿದಂತೆ ವಿಶ್ವದಲ್ಲಿ ಸಾಕಷ್ಟು ಅವಕಾಶಗಳುಂಟು ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. (ಕರ್ನಲ್) ಎಂ. ದಯಾನಂದ ಹೇಳಿದರು.
ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ವಿಶ್ವ ನರ್ಸಿಂಗ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನರ್ಸಿಂಗ್ ಸಿಬ್ಬಂದಿಯು ರೋಗಿಗಳ ಆರೈಕೆಯೊಂದಿಗೆ ಸಂಶೋಧನೆಗಳಲ್ಲಿ ತೊಡಗಬೇಕು. ಸದಾ ಮಾಹಿತಿಯೊಂದಿಗೆ ಸನ್ನದ್ದವಾಗಿರಬೇಕು ಎಂದ ಅವರು, ನರ್ಸಿಂಗ್ ಸೇವೆ ಬಹಳ ಮುಖ್ಯ. ನರ್ಸಿಂಗ್ ಸೇವೆಯ ಅವಶ್ಯಕತೆ ಸಾಕಷ್ಟಿದ್ದು, ವೈದ್ಯರಿಗಿಂತ ಮುಂಚೆ ರೋಗಿಗಳ ಸಂಪರ್ಕಕ್ಕೆ ಬರುವವರು ಶುಶ್ರೂಶಕರು. ಸಹಜವಾಗಿಯೆ ವೈದ್ಯರು ಮತ್ತು ರೋಗಿಗಳ ಮದ್ಯೆ ಶುಶ್ರೂಶಕರು ಕೊಂಡಿಯಾಗಿ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.
ಕ್ಯಾನ್ಸರ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ.ಜಾಲಿ ಮಾತನಾಡಿ, 24 ವರ್ಷಗಳ ಹಿಂದಿನ ಭೂಕಂಪ, 2005 ರಲ್ಲಿನ ಪ್ರವಾಹ ಹಾಗೂ ಸುನಾಮಿ ಸಂದರ್ಭದಲ್ಲಿ ನರ್ಸಿಂಗ್ ಸಿಬ್ಬಂದಿ ಕಾರ್ಯ ಅತ್ಯಂತ ಶ್ಲಾಘನೀಯವಾದದ್ದು. ಅಚಲ ಧೃಡವಾದ ನಂಬಿಕೆಯೊಂದಿಗೆ ಗುರಿ ಮುಟ್ಟುವವರೆಗೆ ಓಡಬೇಕಾಗುತ್ತದೆ. ಪ್ರಯತ್ನವೇ ಪರಮಾತ್ನ ಸೇವೆ ಎಂದರು.

ರೋಗಿಗಳ ಆರೈಕೆಯಲ್ಲಿ ಅತ್ಯುತ್ತಮವಾಗಿ ತೊಡಗಿಕೊಂಡಿದ್ದ ನರ್ಸಿಂಗ್ ಸಿಬ್ಬಂದಿಗಳನ್ನು ಸತ್ಕರಿಸಲಾಯಿತು. ಡಾ. ಆರ್. ಬಿ.ನೇರ್ಲಿ , ಡಾ. ಆರಿಫ್ ಮಾಲ್ದಾರ, ಡಾ. ರಾಜೇಶ ಪವಾರ, ಡಾ. ವಿರೇಶ ನಂದಗಾವಿ ಉಪಸ್ಥಿತರಿದ್ದರು. ಆಸ್ಪತ್ರೆಯ ನರ್ಸಿಂಗ್ ಸೂಪರಿಟೆಂಡೆಂಟ್ ಶಕುಂತಲಾ ಕೋರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಲ್ವಿ ಮುಧೋಳ ಸ್ವಾಗತಿಸಿದರು. ಆಶಾರಾಣಿ ಪ್ರಾರ್ಥಿಸಿದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?