Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೆಣ್ಣು ಮಗು ಮಾರಾಟ ಪ್ರಕರಣ ಬೆಳಕಿಗೆ

 

ಬೆಳಗಾವಿ :
ಬೆಳಗಾವಿಯಲ್ಲಿ ಹೆಣ್ಣು ಮಗು ಮಾರಾಟ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ರಾಜಕುಮಾರ ಸಿಂಗಪ್ಪಾ ರಾಠೋಡ ಸಾ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ದತ್ತು ಕೇಂದ್ರದ ಸಂಯೋಜಕರು ರಾಮತೀರ್ಥ ನಗರ ಬೆಳಗಾವಿ ಇವರು ಈ ದಿನಾಂಕ: ೦೯-೦೬-೨೦೨೪ ರಂದು ಮಾಳಮಾರುತಿ ಪೊಲೀಸ್ ಠಾಣೆಗೆ ಹಾಜರಾಗಿ ತಮ್ಮ ಪಿರ್ಯಾದಿ ಕೊಟ್ಟಿದ್ದು ಅದರಲ್ಲಿ ೦೯-೦೬-೨೦೨೪ ರಂದು ಬೆಳಿಗ್ಗೆ ೬ ಗಂಟೆಯ ಸುಮಾರಿಗೆ ಆರೋಪಿತಳಾದ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನ್ ಸಾ: ನೇಗಿನಹಾಳ ತಾ: ಬೈಲಹೊಂಗಲ ಇವರು ಇದರಲ್ಲಿಯ ಮತ್ತೊಬ್ಬ ಆರೋಪಿತನಾದ ಡಾ: ಅಬ್ದುಲಗಫಾರ ಹುಸೇನಸಾಬ ಲಾಡಖಾನ ಸಾ: ಹಂಚಿನಾಳ ತಾ: ಸವದತ್ತಿ ಹಾಲಿ: ಸೋಮವಾರ ಪೇಠ ಕಿತ್ತೂರ ಇವನಿಂದ ಹಣ 6೦,೦೦೦/- ರೂ ಕೊಟ್ಟು ಅಂದಾಜು 3೦ ದಿನದ ಹೆಣ್ಣು ಮಗುವನ್ನು ಖರೀದಿ ಮಾಡಿ ಸದರಿ ಹೆಣ್ಣು ಮಗುವನ್ನು ಬೆಳಗಾವಿಯಲ್ಲಿ ಮಾರಾಟ ಮಾಡಲು ಉದ್ದೇಶಿಸಿದಾಗ ಮಾಹಿತಿ ದೊರೆತಿದಿದ್ದು ನಂತರ ನಾವು ರಹಸ್ಯ ಕಾರ್ಯಾಚರಣೆ ನಡೆಸಿ ಸದರಿ ಶಿಶುವನ್ನು ರೋಖ ಹಣ 1,4೦,೦೦೦/- ರೂಪಾಯಿಗಳಿಗೆ ಖರೀದಿಸುವುದಾಗಿ ಇದರಲ್ಲಿ ಆರೋಪಿ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನ್ ಇವಳಿಗೆ ನಂಬಿಸಿದ್ದು ನಂತರ ಆರೋಪಿತಳು ಮಗುವನ್ನು ಮಾರಾಟ ಮಾಡಲು ಬಂದಾಗ ಸದರಿ ಹೆಣ್ಣು ಮಗುವನ್ನು ರಕ್ಷಿಸಿ ಅದನ್ನು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು ಸದರಿ ಶಿಶುವನ್ನು ಅಕ್ರಮವಾಗಿ ಖರೀದಿಸಿ ಅದನ್ನು ಮಾರಾಟ ಮಾಡಲು ಪ್ರಯತ್ನಿಸಿದ ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನರ ಸಾ: ನೇಗಿನಹಾಳ ತಾ: ಬೈಲಹೊಂಗಲ ಇವಳ ಮೇಲೆ ನಮ್ಮದು ಪಿರ್ಯಾದಿ ಇರುತ್ತದೆ ಅಂತಾ ವಗೈರೆ ನಮೂದ ಇದ್ದ ಪಿರ್ಯಾದಿಯನ್ನು ಸ್ವೀಕರಿಸಿ ಅದನ್ನು ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ: ೧೧೯/೨೦೨೪ ಕಲಂ: ೩೬೩, ೩೭೦ ಐ,ಪಿ.ಸಿ. ಮತ್ತು ೮೦, ೮೧ ಜುನೈಲ್ ಜಸ್ಟಿಸ್ (ಮಕ್ಕಳ ಸಂರಕ್ಷಣಾ ಕಾಯ್ದೆ) ೨೦೧೫ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಆರೋಪಿತರಾದ ೧) ಮಹಾದೇವಿ @ ಪ್ರಿಯಾಂಕಾ ಗಂಡ ಬಾಹುಬಲಿ ಜೈನರ ಸಾ: ನೇಗಿನಹಾಳ ತಾ: ಬೈಲಹೊಂಗಲ ೨) ಡಾ: ಅಬ್ದುಲಗಫಾರ ಹುಸೇನಸಾಬ ಲಾಡಖಾನ ಸಾ: ಹಂಚಿನಾಳ ತಾ: ಸವದತ್ತಿ ಹಾಲಿ: ಸೋಮವಾರ ಪೇಠ ಕಿತ್ತೂರ, ೩) ಚಂದನ ಗಿರಿಮಲ್ಲಪ್ಪಾ ಸುಭೇದಾರ ಸಾ: ತುರಕರ ಶೀಗಿಹಳ್ಳಿ ತಾ: ಬೈಲಹೊಂಗಲ, ೪) ಪವಿತ್ರಾ ತಂದೆ ಸೋಮಪ್ಪಾ ಮಡಿವಾಳರ ಸಾ: ಸಂಪಗಾಂವ ತಾ: ಬೈಲಹೊಂಗಲ, ೫) ಪ್ರವೀಣ ಮಂಜುನಾಥ ಮಡಿವಾಳರ ಸಾ: ಹೊಸಟ್ಟಿ ತಾ: ಧಾರವಾಡ ಇವರಿಗೆ ಪತ್ತೆ ಮಾಡಿ ಬಂಧಿಸಲಾಗಿದೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?