Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಹೊಸ ಇತಿಹಾಸ ಸೃಷ್ಟಿಸಿದ ಬೆಳಗಾವಿ ಗಣೇಶೋತ್ಸವ..!

ಜನ ಜೀವಾಳ ಜಾಲ: ಬೆಳಗಾವಿ :ಈ ಸಲದ ಬೆಳಗಾವಿ ಸಾರ್ವಜನಿಕ ಗಣೇಶೋತ್ಸವ ಹೊಸ ಇತಿಹಾಸ ಬರೆದಿದೆ. ಸತತ 30 ಗಂಟೆಗಳ ಕಾಲ ಗಣೇಶ ವಿಸರ್ಜನೆ ನಡೆಯುವ ಮೂಲಕ ಬೆಳಗಾವಿ ಮಹಾನಗರದ ಗಣೇಶೋತ್ಸವ ಈ ಬಾರಿ ಹೊಸ ದಾಖಲೆ ಮೆರೆದಿದೆ.

ಅನಂತ ಚತುರ್ದಶಿ ದಿನವಾದ ಗುರುವಾರ ಸಂಜೆ 4 ರಿಂದ ಆರಂಭವಾದ ಗಣೇಶ ಮೂರ್ತಿಗಳ ಮೆರವಣಿಗೆ ಶುಕ್ರವಾರ ರಾತ್ರಿ 11:00 ಗಂಟೆಗೆ ಅದ್ದೂರಿ ವಿಸರ್ಜನೆ ಯೊಂದಿಗೆ ಸಮಾರೋಪಗೊಂಡಿದೆ. ಒಟ್ಟಾರೆ ಬೆಳಗಾವಿಯ ಗಣೇಶೋತ್ಸವ ಈ ಬಾರಿ ದಾಖಲೆಯ ಅವಧಿವರೆಗೂ ನಡೆದು ಸಂಚಲನಕ್ಕೆ ಕಾರಣವಾಗಿದೆ.

ಕಳೆದ 11 ದಿನಗಳಿಂದ ಆಕರ್ಷಣೆಗೆ ಕಾರಣವಾಗಿದ್ದ ಬೆಳಗಾವಿ ಸಾರ್ವಜನಿಕ ಗಣೇಶೋತ್ಸವಕ್ಕೆ ಶುಕ್ರವಾರ ರಾತ್ರಿ ಕೊನೆಗೂ ವಿಧ್ಯುಕ್ತವಾಗಿ ತೆರೆ ಬಿದ್ದಿದೆ. ಅದರಲ್ಲೂ ಗುರುವಾರ ಹಾಗೂ ಶುಕ್ರವಾರ ಗಣೇಶ ವಿಸರ್ಜನೆಯ ಸುಂದರ ನೋಟವನ್ನು ಲಕ್ಷಾಂತರ ಜನ ವೀಕ್ಷಿಸಿದರು. ಕಪಿಲೇಶ್ವರ ಸೇರಿದಂತೆ ವಿವಿಧ ಗಣೇಶ ವಿಸರ್ಜನೆ ತಾಣಗಳಲ್ಲಿ ಭಕ್ತರ ದಂಡೇ ನೆರೆದಿತ್ತು. ಸಾಮಾಜಿಕ ಜಾಲತಾಣಗಳು ಹಾಗೂ ವಿವಿಧ ವಾಹಿನಿಗಳು ನೀಡಿದ ನೇರ ದೃಶ್ಯ, ವಿವರಣೆಯನ್ನು ಬೆಳಗಾವಿ ಮಾತ್ರವಲ್ಲ, ನೆರೆಹೊರೆಯ ರಾಜ್ಯಗಳು ಹಾಗೂ ಹೊರದೇಶಗಳ ಜನತೆ ಸಹ ವೀಕ್ಷಿಸಿ ಆನಂದ ತುಂದಿಲಗೊಂಡರು.

ಗಣೇಶ ಮೆರವಣಿಗೆಯ ಸುಂದರ ನೋಟವನ್ನು ವೀಕ್ಷಿಸಲು ಬೆಳಗಾವಿಗೆ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಜನತೆ ಗಣೇಶ ವಿಸರ್ಜನೆಯ ವೈಭವದ ಮೆರವಣಿಗೆಯನ್ನು ಕಂಡು ಪುಳಕಿತಗೊಂಡರು. ಒಟ್ಟಾರೆ, ಹೇಳುವುದಾದರೆ ಬೆಳಗಾವಿಯ ಗಣೇಶೋತ್ಸವ ಈ ಸಲ ಹೊಸ ದಾಖಲೆ ಮಾಡಿದೆ.

ಅಭಿನಂದನೀಯ ಆಡಳಿತ ವ್ಯವಸ್ಥೆ :
ಬೆಳಗಾವಿ ಗಣೇಶೋತ್ಸವದ ಅಷ್ಟು ಯಶಸ್ಸು ಬೆಳಗಾವಿ ಮಹಾನಗರ ಪಾಲಿಕೆಗೆ ಸಲ್ಲಬೇಕು. ಅದರಲ್ಲೂ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರ ಅಚ್ಚುಕಟ್ಟುತನದ ವ್ಯವಸ್ಥೆಗಳು, ಮೇಲ್ವಿಚಾರಣೆ ಬೆಳಗಾವಿ ಜನತೆಯ ಮನೆಗೆದ್ದಿತು. ಗಣೇಶೋತ್ಸವದ ಅಷ್ಟು ವ್ಯವಸ್ಥೆಗಳ ಜವಾಬ್ದಾರಿ ವಹಿಸಿಕೊಂಡ ಆಯುಕ್ತ ಅಶೋಕ ದುಡಗುಂಟಿ ಅವರು ತಮ್ಮ ಇಷ್ಟು ವರ್ಷದ ಅಡಳಿತದ ಅನುಭವವನ್ನು ಧಾರೆಯೆರೆದು ಈ ಬಾರಿಯ ಗಣೇಶೋತ್ಸವ ಅತ್ಯಂತ ಯಶಸ್ವಿಗೊಳ್ಳಲು ನೇರ ಕಾರಣರಾದರು. ಅವರ ಮಾರ್ಗದರ್ಶನದ ಮೂಲಕ ಮಹಾನಗರ ಪಾಲಿಕೆಯ ಇಡೀ ಆಡಳಿತ ವರ್ಗ ಗಣೇಶೋತ್ಸವ ಅತ್ಯಂತ ಯಶಸ್ವಿಯಾಗಲು ಬೆವರು ಹರಿಸಿ ದುಡಿಯಿತು. ಈ ವರ್ಷದ ಗಣೇಶೋತ್ಸವ 119 ವರ್ಷಗಳ ಭವ್ಯ ಹಿನ್ನೆಲೆಯುಳ್ಳ ಬೆಳಗಾವಿ ಗಣೇಶೋತ್ಸವಕ್ಕೆ ಹೊಸ ಭಾಷ್ಯ ಬರೆಯಲು ಕಾರಣವಾಯಿತು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯಪಾಲರ ಪತ್ನಿಯ ಆರೋಗ್ಯದಲ್ಲಿ ಏರುಪೇರು :  ದಿಢೀರ್ ಇಂದೋರ್ ಗೆ ತೆರಳಿದ ಗೆಹಲೋಟ್ -ಸಿಎಂ ರಾಜೀನಾಮೆ ಪತ್ರ ಯಾರಿಗೆ ಸಲ್ಲಿಸುತ್ತಾರೆ ?ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರು