Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಬೆಳಗಾವಿ ಜಿಎಸ್‌ಟಿ ಅಧಿಕಾರಿಗಳಿಂದ ಬೃಹತ್ ಜಿಎಸ್‌ಟಿ ವಂಚನೆ ಬಯಲು ಪ್ರಮುಖ ಆರೋಪಿ ಸೆರೆ

ಬೆಳಗಾವಿ; ಬೆಳಗಾವಿ ಜಿಎಸ್​ಟಿ ಗುಪ್ತಚಾರ ನಿರ್ದೇಶಾಲಯ (ಡಿಜಿಡಿಐ) ವಲಯ ಘಟಕದ ಅಧಿಕಾರಿಗಳು ಹರಿಹರದ ಮೇ.ಮರಿಯಂ ಡೀಲರ್ಗಳ ಆವರಣದಲ್ಲಿ ಸುಮಾರು 21.64 ಕೋಟಿ ರೂಪಾಯಿ ಮೌಲ್ಯದ ಜಿಎಸ್ಟಿ ವಂಚನೆ ಪತ್ತೆ ಮಾಡಿದ್ದಾರೆ.

ಪ್ರಮುಖ ಆರೋಪಿ ಮಹಮ್ಮದ್ ಸಕ್ಲೈನ ನ್ನು ಬಂಧಿಸಿ ಬೆಳಗಾವಿ ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. 14 ದಿನಗಳ ನ್ಯಾಯಾಂಗ ಬಂದನಕೆ ಒಪ್ಪಿಸಲಾಗಿದೆ ಎಂದು ಬೆಳಗಾವಿ ವಲಯದ ಜಿಎಸ್‌ಟಿ ಗುಪ್ತಚಾರ ನಿರ್ದೇಶಾಲಯದ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

112.00 ಕೋಟಿ ಮೌಲ್ಯದ ನಕಲಿ ಇನ್ ವಾಯ್ಸ್ ನೀಡಿರುವುದು ಬೆಳಕಿಗೆ ಬಂದಿದೆ. 17.14 ಕೋಟಿ ಮೌಲ್ಯದ ಇನ್ ಫುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ವಂಚನೆಯಾಗಿದೆ. ಸಂಸ್ಥೆಯ ಮೊಹಮ್ಮದ್ ಸಕ್ಲೈನ್ ನಕಲಿ ಬಿಲ್ ಮೂಲಕ ಐಟಿಸಿಯ ವಂಚನೆ ನಡೆಸಿರುವುದಾಗಿ ಒಪ್ಪಿದ್ದಾರೆ. ರಿವರ್ಸ್ ಚಾರ್ಜ್ ಮೆಕಾನಿಸಂ (RCM)ಅಡಿ 4. 50 ಕೋಟಿ ಜಿಎಸ್‌ಟಿಯ ಕಡಿಮೆ ಪಾವತಿಯನ್ನು ಅವರು ಒಪ್ಪಿದ್ದಾರೆ.

ತೆರಿಗೆದಾರರು ನೋಂದಾಯಿಸದ ಪೂರೈಕೆದಾರರಿಂದ ಲೋಹದ ಸ್ಕ್ರಾಪ್ ಹೆಚ್ಚಾಗಿ ಖರೀದಿ ಮಾಡಿದ್ದಾರೆ. ಆದರೆ ಅದರಲ್ಲಿ ಐಟಿಸಿ ಲಭ್ಯವಿಲ್ಲ. ಹೆಚ್ಚುವರಿಯಾಗಿ ನೋಂದಾಯಿತ ಸಂಸ್ಥೆಗಳಿಂದ ಈ ಸಂಸ್ಥೆ ಹೆಚ್ಚಿನ ಖರೀದಿಗಳು ಅಸ್ತಿತ್ವದಲ್ಲಿ ಇಲ್ಲದ ಅಥವಾ ಕಾಲ್ಪನಿಕ ಸಂಸ್ಥೆಗಳಿಂದ ಬಂದಿವೆ.

ಮೇ. ಮರಿಯಂ ಸ್ಕ್ರಾಪ್ ಡೀಲರ್ಗಳು ನೋಂದಾಯಿಸದ ವಿತರಕರಿಂದ ನಿಜವಾದ ಖರೀದಿಗಳನ್ನು ಐಟಿಸಿಗಳೊಂದಿಗೆ ನಕಲಿ ಸಂಸ್ಥೆಗಳಿಂದ ಪಡೆದಿದ್ದಾರೆ. ಕಮಿಷನ್ ಗೆ ನಕಲಿ ಇನ್ವಾಯ್ಸ್ ನೀಡುವ ಉದ್ದೇಶದಿಂದ ನೋಂದಣಿ ಪಡೆಯಲು ನಕಲಿ ದಾಖಲೆ ಬಳಸಿರುವುದು ಸಹ ತನಿಖೆ ವೇಳೆ ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ,

 

 
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?