Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

ಕಾಕತಿ ಪೊಲೀಸರ ಮೇಲೆ ಹಲ್ಲೆ..!

ಕಾಕತಿ ಪೊಲೀಸರ ಮೇಲೆ ಹಲ್ಲೆ..!

ಲಾಠಿ ಕಸಿದುಕೊಂಡು ಪೆದೆ ಮೇಲೆಯೇ ಹಲ್ಲೆ ನಡೆಸಿದ ಯುವಕರು.

ಇನ್ನೂ ಬಂಧನವಾಗದ ಆರೋಪಿಗಳು.

ಬೆಳಗಾವಿ : ಕಾಕತಿ ಗ್ರಾಮದ ಲಕ್ಷ್ಮೀ ನಗರದಲ್ಲಿ ಮುಸ್ಲಿಂ ಸಮುದಾಯದೊಬ್ಬರ ಮದುವೆಯಲ್ಲಿ ಮಧ್ಯರಾತ್ರಿವರೆಗೆ ಡಾಲ್ಬಿ ಹಚ್ಚಿ ಕುಣಿಯುತ್ತಿದ್ದಾಗ ಬೇಸತ್ತ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಅನುಮತಿ ಪಡೆಯದೆ ಹಚ್ಚಿದ್ದ ಡಾಲ್ಬಿ ಬಂದ ಮಾಡಲು ಮುಂದಾದಾಗ ಪೊಲೀಸರ ಮೇಲೆ ಸೌಂಡ್ ಸಿಸ್ಟಮ್ ಮಾಲಿಕ ಹಾಗೂ ಯುವಕರು ಸೇರಿಕೊಂಡು ಪೋಲಿಸರ ಕೈಯಲ್ಲಿದ್ದ ಲಾಠಿಯನ್ನು ಕಸಿದುಕೊಂಡು ಪೊಲೀಸರಿಗೆ ಹೊಡೆದಿರುವ ಘಟನೆ ಗುರುವಾರ ನಸುಕಿನ ಜಾವ 12.30 ಘಂಟೆಗೆ ಸಂಭವಿಸಿದೆ.

ಕಾಕತಿ ಲಕ್ಷ್ಮೀ ನಗರದ ನಿವಾಸಿ ವಸಿಂ ಮಕಾಂದರ ಎಂಬುವರು ಮನೆಯ ಮುಂದೆ ನಡೆಯುತ್ತಿದ್ದ ಮದುವೆ ಕಾರ್ಯಕ್ರಮದಲ್ಲಿ ಸಂತೋಷ ಬಂಡಾರಿ ಹಾಗೂ ರಾಘವೇಂದ್ರ ಶ್ರೀಶೈಲ ಲೋಗಾವಿ ಎಂಬುವರು ಪೆಂಡಾಲ್ ಹಾಕಿದ್ದಾರೆ. ಪರಾವಾನಿಗೆ ಪಡೆಯದೆ ಸೌಂಡ್ ಸಿಸ್ಟಮ್ ಹಾಗೂ ಡಾಲ್ಬಿ ಹಚ್ಚಿದ್ದಾರೆ. ರಾತ್ರಿ 12 ಗಂಟೆಯಾದರೂ ಬಂದ ಮಾಡದ ಕಾರಣ ಅಕ್ಕಪಕ್ಕದ ಮನೆಯವರು ಬೆಸತ್ತು ಪೊಲೀಸ್ ಸಹಾಯವಾಣಿ 112 ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ ಹೊಯ್ಸಳ ವಾಹನ ಕಾನೂನು ಬಾಹಿರವಾಗಿ ಪರವಾನಿಗೆ ಪಡೆಯದೆ ಹಚ್ಚಿದ್ದ ಡಾಲ್ಬಿ ಬಂದ ಮಾಡಲು ಮುಂದಾಗಿದ್ದ ಕಾಕತಿ ಪೆದೆ ಲತೀಫ್ ಮುಶಾಪೂರೆ ಮೇಲೆ ಸೌಂಡ್ ಸಿಸ್ಟಮ್ ನಡೆಸುತ್ತಿದ್ದ ಸಂತೋಷ ಹಾಗೂ ರಾಘವೇಂದ್ರ ಅವರ ಕೈಯಲ್ಲಿದ್ದ ಲಾಠಿಯನ್ನು ಕಸಿದುಕೊಂಡು ಅವರ ಕುತ್ತೆಗೆಗೆ ಹೊಡೆದು ಹಲ್ಲೆ ಮಾಡಿದ್ದಾರೆ.

ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮದುವೆ ಕಾರ್ಯಕ್ರಮ ಆಯೋಜಕ ವಸಿಂ ಮಕಾಂದರ, ಡಾಲ್ಬಿ ಮಾಲಿಕ ಸಂತೋಷ ಭಂಡಾರಿ ಹಾಗೂ ಜತೆಗಿದ್ದ ರಾಘವೇಂದ್ರ ಲೋಗಾವಿ ಎಂಬುವರ ಮೇಲೆ IPC 353, 324, 332 ಹಾಗೂ KP act 2021 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧನವಾಗದ ಆರೋಪಿಗಳು.

ಪೊಲೀಸರ ಮೇಲೆ ಹಲ್ಲೆ ನಡೆದರೂ ಇಲ್ಲಿಯವರೆಗೆ ಯಾವ ಆರೋಪಿಗಳನ್ನು ಬಧಿಸಲಾಗಿಲ್ಲ. ಕಾಕತಿಯಲ್ಲಿ ಸಾರ್ವಜನಿಕರ ಜೊತೆಗೆ ಪೊಲೀಸರಿಗೂ ರಕ್ಷಣೆ ಇಲ್ಲದಂತಾಗಿದೆ.

ಪೊಲೀಸರಿಗೆ ರಕ್ಷಣೆ ಕೊಡಬೇಕಾಗಿದ್ದ ಇಲಾಖೆ ಡಮ್ಮಿ ಕೇಸ್ ಹಾಕಿ ಪುಂಡರನ್ನು ಕೈ ಬಿಟ್ಟಿದೆ ಎಂದು ಸಿಬ್ಬಂದಿಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?