Web Stories
Jana Jeevala News
ePaper
| LIVE |Local|Crime|State|National| International|Politics|Business|Education|Tech|Entertainment|Sports|Editorial|Health|Health|Traveling|Beauty Tips |
| LIVE |Local|Crime|State|National| International
PoliticsBusinessEducationTechEntertainmentSportsEditorialHealthHealthTravelingBeauty TipsRecipes Tips

43 ವರ್ಷಗಳ ನಂತರ ಸೇರಿದ ಹಳೇ ವಿದ್ಯಾರ್ಥಿಗಳು ಬಾಲ್ಯದ ನೆನಪುಗಳ ಮೆಲುಕು

ಬೈಲಹೊಂಗಲ: ತಾಲ್ಲೂಕಿನ ಸಂಪಗಾವಿಯ ಆರ್‌ಇಎಸ್‌ ಪ್ರೌಢಶಾಲೆಯ ಎಸ್ಸೆಸ್ಸೆಲ್ಸಿ 1980–81ನೇ ಬ್ಯಾಚ್‌ನ ವಿದ್ಯಾರ್ಥಿಗಳ ಸ್ನೇಹ ಬಳಗವು ಸಂಪಗಾವಿಯ ಬೈಲಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಗುರುವಂದನೆ ಮತ್ತು ಸ್ನೇಹ ಸಂಗಮ ಕಾರ್ಯಕ್ರಮ ಹಮ್ಮಿಕೊಂಡಿತ್ತು.

43 ವರ್ಷಗಳ ನಂತರ ಸೇರಿದ ಹಳೇ ವಿದ್ಯಾರ್ಥಿಗಳು ತಮ್ಮ ಬಾಲ್ಯದ ನೆನಪುಗಳನ್ನು ಮೆಲುಕು ಹಾಕಿದರು. ತಾವು ಕಲಿತ ಶಾಲೆ ಕಂಡು ಪುಳಕಗೊಂಡರು.

ಹಾವೇರಿ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವೆ ಪ್ರೊ.ವಿಜಯಲಕ್ಷ್ಮಿ ಪುಟ್ಟಿ, ‘ಗುರು ಹಾಗೂ ಶಿಷ್ಯ ಪರಂಪರೆ ನಮ್ಮಲ್ಲಿ ಮಹತ್ವ ಪಡೆದಿದೆ. ಪ್ರತಿಯೊಬ್ಬರೂ ತಮ್ಮ ಶಿಕ್ಷಕರು, ಶಾಲೆ, ಊರು, ಹೆತ್ತವರು ಮತ್ತು ಸಮಾಜದ ಋಣ ತೀರಿಸಬೇಕು’ ಎಂದು ಕರೆಕೊಟ್ಟರು.

ಸಾನ್ನಿಧ್ಯ ವಹಿಸಿದ್ದ ಚನ್ನವೀರಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.

ಎಸ್‌.ಸಿ.ಹಳ್ಳೂರ, ಕೆ.ಕೆ.ಹಾರೂಗೊಪ್ಪ, ಎಂ.ವೈ.ರಾವುಳ, ಸುಮಿತ್ರಾ ಶರಣಪ್ಪನವರ, ಎ.ಎಂ.ಲೋದಿ, ಎಸ್‌.ಎಸ್‌.ಕುಂಬಾರ, ಬಿ.ಎಸ್‌.ಸಿದ್ನಾಳ, ಪಿ.ಬಿ.ಗುರುಪುತ್ರನವರ, ಪತ್ರೆಪ್ಪ ಹುಣಶಿಕಟ್ಟಿ ಅವರನ್ನು ಸತ್ಕರಿಸಲಾಯಿತು.

ನಿವೃತ್ತ ಶಿಕ್ಷಕ ಬಿ.ಬಿ.ಚರಂತಿಮಠ, ಗ್ರಾ.ಪಂ ಅಧ್ಯಕ್ಷ ಶ್ರೀಕಾಂತ ಹಲ್ಕಿ ಆರ್‌ಇಎಸ್‌ ಪ್ರೌಢಶಾಲೆ ಅಧ್ಯಕ್ಷ ಶಂಕ್ರೆಪ್ಪ ಸಿದ್ನಾಳ, ಹುಬ್ಬಳ್ಳಿಯ ಚೇತನ ಕಾಲೇಜು ಅಧ್ಯಕ್ಷ ಗುರುಶಾಂತ ವಳಸಂಗ, ಮುಖ್ಯಶಿಕ್ಷಕ ಶ್ರೀಕಾಂತ ಉಳ್ಳೇಗಡ್ಡಿ ಶ್ರೀಕಾಂತ ನೇಗಿನಹಾಳ, ಎಸ್.ಡಿ.ಗಂಗನ್ನವರ,
ಅಡಿವೆಪ್ಪ ರಾಯನ್ನವರ, ಮಹಾದೇವ ವಕ್ಕುಂದ, ಮಹಾಂತೇಶ ಪುಟ್ಟಿ, ಶೇಖಯ್ಯ ಯರಗಂಬಳಿಮಠ, ಮೋಹನ ಬಡಿಗೇರ, ರುದ್ರಪ್ಪ ಅಂಗಡಿ, ಮುಗುಟಸಾಬ್‌ ಗೂಡುನವರ, ರಾಜೇಂದ್ರ ಪಾಟೀಲ, ಬಸನಗೌಡ ಪಾಟೀಲ,
ಸುಜಾತಾ ಅಕ್ಕಿ, ಕಸ್ತೂರಿ ಅಕ್ಕಿ ಇತರರಿದ್ದರು.
Advertisement
Author
Jana Jeevala
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಿಎಂ ಸಿದ್ದರಾಮಯ್ಯ ಇಂದೇ ರಾಜೀನಾಮೆ : ಸಚಿವರಿಗೆ ಬೆಳಿಗ್ಗೆಯೇ ಸಚಿವರಿಗೆ ಉಪಾಹಾರ ಕೂಟ..!ಹಿರಿಯ ವರದಿಗಾರ ಸುಭಾಷ ದಲಾಲ ನಿಧನ ರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುರಾಜ್ಯ ವಿಪತ್ತು ನಿರ್ವಹಣಾ ಪಡೆಯ ಸಿಪಿಐ ಆತ್ಮಹತ್ಯೆಗೆ ಶರಣುತಿನ್ನುವ ಮೊದಲು ಮಾವಿನ ಹಣ್ಣು ನೀರಿನಲ್ಲಿ ನೆನೆಸಿ ಇಡಬೇಕೇ ?ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರಾ ? ಇಂದಿನ ‘ಬ್ರೇಕ್‌ಫಾಸ್ಟ್ ಮೀಟಿಂಗ್’ ಮೇಲೆ ಎಲ್ಲರ ಕಣ್ಣು !23 ಜಿಲ್ಲೆಗಳಿಗೆ 'ಯೆಲ್ಲೊ ಅಲರ್ಟ್ ನೀಡಿದ ಹವಾಮಾನ ಇಲಾಖೆಕನಸು ಸಾಕಾರವಾಗುವ ಸಮಯ...ಈಗ KPCC ಯತ್ತ 2028 ಕ್ಕೆ ಸಿಎಂ ಆಗುತ್ತವತ್ತ ಮಾಸ್ಟರ್ ಪ್ಲ್ಯಾನ್ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಚುನಾವಣೆ ಪ್ರಮೋದ್ ಮಧ್ವರಾಜ್, ಎನ್.ಮಹೇಶ್‌, ರಘು ಕೌಟಿಲ್ಯ ಹೆಸರುನಾಳೆ ಸಿದ್ದರಾಮಯ್ಯ ರಾಜೀನಾಮೆ ?